ಬಂಜೆಯಾಗಿದ್ದರೆ ಚೆನ್ನ

ಮಸೀದಿಗಳ ಉರುಳಿಸಿ
ಮಂದಿರಗಳ ಕಟ್ಟುವವರೇ
ಬಿದ್ದಿರುವ ಮನಗಳನ್ನೆಂತು
ಎತ್ತಿ ನಿಲ್ಲಿಸುವಿರಿ ಹೇಳಿ?
ಬಿದ್ದ ಗೋಡೆಗಳ ಮತ್ತೆ
ಎತ್ತಿ ನಿಲ್ಲಿಸಲೂ ಬಹುದು
ಎರಡು ಮನಗಳ ಮಧ್ಯ
ಎದ್ದ ಗೋಡೆಯನ್ನೆಂತು
ಬೀಳಿಸುವಿರಿ? ಹೇಳಿ.

ಕಂಡಿದ್ದೆವು ಹಿಂದೆ
ಚರಿತ್ರೆಯಲಿ ಕರಾಳ ದಿನ.
ಅಂದು ಹಿಂದೊಮ್ಮೆ
ಮಹಾತ್ಮ ಗಾಂಧಿಗೆ
ಗುಂಡಿಟ್ಟು ಕೊಂದ
ಈ ಚೆಡ್ಡಿ ವೀರರು,
ಇಂದು ಮಸೀದಿಯುರುಳಿಸಿ,
ಮುಖಕ್ಕೆ ಮಸಿ ಬಳಿದು
ಮತ್ತೊಂದು ಕಪ್ಪು ಚುಕ್ಕೆ
ಇಟ್ಟು ಹೋದವು ಚರಿತ್ರೆಗೆ.

ಡಿಸೆಂಬರ್ ಆರರಂದು
ಅಯೋಧ್ಯೆಯೆಡೆಗೆ
ಸಾಗರದಂತೆ ಹರಿದ
ಜನತೆಗೆ ಮತಿಗೆಡಿಸಿ,
ದಿಕ್ಕು ತಪ್ಪಿಸುವ ಧರ್ಮದ
ತುತ್ತೆಯನ್ನು ಕುಡಿಸಿ,
ಅವನತಿಯ ಶಿಖರವ
ಹತ್ತಿಸಿದವರೆ,
ಹೇಳಿ ನೀವು ನಿಜವಾದ
ಭಾರತ ಮಾತೆಯ ಮಕ್ಕಳೇ.

ಕರಸೇವಕರ ಕೈಯಲ್ಲಿ
ನಲುಗಿ ಹೋದ
ದೇವರು, ಧರ್ಮಗಳು –
ಮತ್ತೆಂದೂ ಮತಾಂಧರ
ಕೈಯಲ್ಲಿ ಸಿಕ್ಕಿಕೊಳ್ಳಲಾರೆನೆಂದು
ಪರಿತಪಿಸುತ್ತಿದ್ದರೆ-

ಭಾರತಾಂಬೆಯ ಕಣ್ಣುಗಳಲ್ಲಿ
ರಕ್ತದ ಕಣ್ಣೀರು-ಹರಿದು,
ಸಮತೆಯ ಎದೆಹಾಲು ಕುಡಿಸಿ,
ಪೊರೆದು ಪೋಷಿಸಿದ
ನನ್ನ ಮುಖಕ್ಕೇ
ಮಸಿ ಬಳಿದ ಇವರಿಗೆ
ನಾ ಕೊಟ್ಟ ಎದೆಹಾಲು
ವಿಷವಾಗಬಾರದಿತ್ತೆ?
ಎಂದು ಪರಿತಪಿಸುತ್ತಿರುವ
ಭಾರತ ಮಾತೇ ಹೇಳುತ್ತಿದ್ದಾಳೆ
“ಇಂತಹ ಮಕ್ಕಳನ್ನು
ಹೆರುವುದಕ್ಕೆ ಬದಲು
ನಾನು ಬಂಜೆಯಾಗಿದ್ದರೆ
ಎಷ್ಟೋ ಚೆನ್ನ” ಎಂದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬರಿ ಲಂಚವಿರುವಲ್ಲಿ ಸಾವಯವ ಮಂಚವೇರೀತೇ?
Next post ರೈಲು

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

cheap jordans|wholesale air max|wholesale jordans|wholesale jewelry|wholesale jerseys